Tuesday, March 8, 2016

ಮಿನುಗುವುದು (ವಿಶ್ವ ವಾಣಿ - ಶ್ರೀವತ್ಸ ಜೋಶಿ ಲೇಖನದ ನೀತಿ ಕತೆಯ ಕಾವ್ಯಾನುವಾದ)

ಸರ್ಪವೊಂದು ಮಿಂಚುಹುಳುವಿನ
ಹಿಂದೆ ಬಿದ್ದು ಅದನು
ತಿನ್ನಲು ಹವಣಿಸುತಿತ್ತು || ೧ ||

ಭಯದಿಂದ ಅತ್ತಿಂದಿತ್ತ ಹಾರಾಡಿದ
ಮಿಂಚುಹುಳುವನ್ನು
ಬೆಂಬಿಡದೆ ಹಿಂಬಾಲಿಸಿತ್ತು ಸರ್ಪ || ೨ ||

ಮೂರು ದಿನ ತಪ್ಪಿಸಿಕೊಂಡು
ದಣಿದ ಮಿಂಚುಹುಳು ಕೊನೆಗೂ
ಸುಸ್ತಾಗಿ ಶರಣಾಗಿತ್ತು || ೩ ||

ಗೆದ್ದ ದರ್ಪದ ನಗೆ ಬೀರಿದ ಸರ್ಪಕ್ಕೆ
ಮಿಂಚುಹುಳು ವಿನಂತಿಸಿತು ನನ್ನ ಕೊನೆ ಆಸೆ
ಕೇಳಬಹುದೇ ನಾನು ನಿನಗೆ ಮೂರು ಪ್ರಶ್ನೆ || ೪ ||

ಸರ್ಪವೆಂದಿತು ತೀರಿಸಿಕೊ
ಸಾಯುವ ಮೊದಲು
ಈ ನಿನ್ನ ಕೊನೆ ಆಸೆ || ೫||

ಮಿಂಚುಹುಳುವಿನ ಮೊದಲ ಪ್ರಶ್ನೆ
ನಾನಿದ್ದೇನೆಯೇ ನಿನ್ನ ಆಹಾರ ಸರಪಣಿಯಲ್ಲಿ?
ಸರ್ಪವೆಂದಿತು ಇಲ್ಲ  || ೬ ||

ಮಿಂಚುಹುಳುವಿನ ಎರಡನೆಯ ಪ್ರಶ್ನೆ
ನಾನೇನಾದರೂ ನಿನಗೆ ಕೆಡಕು  ಮಾಡಿದ್ದೇನೆಯೇ  ?
ಸರ್ಪವೆಂದಿತು ನೀನಾ ಇಲ್ಲವೇ ಇಲ್ಲ  || ೬ ||

ಮಿಂಚುಹುಳು ಆಶ್ಚರ್ಯದಿಂದ ಕೊನೆ ಪ್ರಶ್ನೆ ಕೇಳಿತು
ಹಾಗಾದರೆ ನನ್ನನೇಕೆ ಕೊಲ್ಲಲು ಹವಣಿಸುತ್ತಿರುವೆ?
ಸರ್ಪವೆಂದಿತು ನೀನು ಮಿನುಗುವುದು ನನ್ನಿಂದ ಸಹಿಸಲಾಗುತಿಲ್ಲ || ೭ ||
ಬುಡ ಬುಡ್ಕಿ ಬಾಬಾ

ವಿಶ್ವ ವಾಣಿ ೦೬ ಮಾರ್ಚ್ ೨೦೧೬  "ತಿಳಿರು ತೋರಣ" ಅಂಕಣದಲ್ಲಿ
ಶ್ರೀವತ್ಸ ಜೋಶಿ ಲೇಖನದ ನೀತಿ ಕತೆಯ ಕಾವ್ಯಾನುವಾದ



No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...