Wednesday, August 24, 2016

ನಾವ್ಯಾರು

ವಜ್ರವ ಬೆಲೆ ತಿಳಿಯುವುದಂತೆ
ವಜ್ರದ ಭಾರ ಬಣ್ಣ ಸ್ಪಷ್ಟತೆ
ಕುಸುರಿ ಆಧರಿಸಿ || ೧ ||

ಪ್ರತಿ ಮನುಷ್ಯನು ಹುಟ್ಟಿದಾಗ
ಒಂದು ಕಚ್ಚಾ ರತ್ನದಂತೆ
ಭಾರ ಬಣ್ಣ ಸ್ಪಷ್ಟತೆ ಸಿಗುವದು
ನಮ್ಮ ಪೂರ್ವ ಜನ್ಮದ ಕರ್ಮದಂತೆ || ೨ ||

ನಾವೆಲ್ಲ ರತ್ನಾಕಾರರು
ನಮ್ಮ ಕೆಲಸ ನಾವೆಂಬ
ರತ್ನವನ್ನೇ ಉಜ್ಜಿ ತಿಕ್ಕಿ ತೀಡಿ
ಹೊಳಪು ನೀಡುವುದು
ಈ ಜನ್ಮದಲ್ಲಿ
ಹಾಗೂ
ಮುಂದಿನ ಜನ್ಮದ
ಭಾರ ಬಣ್ಣ ಸ್ಪಷ್ಟತೆಗಾಗಿ || ೩ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...