ಆ ಸಂಜೆಯ ಮಾತೇ
ಬೇರೆ ಇತ್ತು
ಮನದಲ್ಲ್ಲಿ ಗುಲಾಬಿ
ಹೂವು ಅರಳಿತ್ತು
ಹೌದಪ್ಪಾ ಹೌದು
ಸರಿಯಾಗಿಯೇ ಕೇಳಿದೆ
ಮನದಲ್ಲಿ ಗುಲಾಬಿ
ಹೂವು ಅರಳಿತ್ತು
ಅದರ ಸುವಾಸನೆ
ಪರಿಮಳ ಸುತ್ತೆಲ್ಲಾ ಹರಡಿತ್ತು
ಆ ಸೌಂದರ್ಯ ಪರಿಮಳ
ಕಂಡು ಹಳೇ ಮಾಡಿಯ
ಕಪ್ಪಾದ ಮಂಗಳೂರು
ಹೆಂಚು ಕೂಡ ನಾಚಿ
ಮತ್ತೆ ಕೆಂಪಾಗಿತ್ತು
- ಬುಡ ಬುಡ್ಕಿ ಬಾಬಾ
ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...
ಮುದದ ಮನಸ್ಸಿಗೆ ಮಂಗಳೂರು ಹೆಂಚು ಕಂಡ ಪರಿ ಸೊಗಸಾಗಿದೆ!
ReplyDeleteಒಂದು ಸುಂದರ ಚಲನಚಿತ್ರ ನೋಡಿ ಮನ ಮುದಗೊಂಡಾಗ ಹೊರಹೊಮ್ಮಿದ ಕವನ. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
Delete