Thursday, August 10, 2017

ಬದನೆಕಾಯಿ ಹುಳಿ

ದೇವರು ದೇವರು ಎಂದು
ಪಾಠ ಪ್ರವಚನಗಳಿಗೆ ತಿರುಗಿ
ತೀರ್ಥ ಕ್ಷೇತ್ರಗಳ ಒಂದು
ಬಿಡದೆ ಅಲಿಯುವರ
ಕಂಡು ಕೇಳಿದೆ
ಇದೆಲ್ಲದರ ಮುಖ್ಯ ಗುರಿಯೇನು?
ಶಾಸ್ತ್ರಗಳ ಒಟ್ಟು ಭಾವವೇನು? || ೧ ||

ಆದ ಕೇಳಿ
ಕೇಳಿಯೂ ಕೇಳದಂತೆ
ಓಡಿದರು ಹತ್ತಿರದ ಗುಡಿಗೆ
ಸೇವೆಗೆ ತಡವಾಯ್ತು ಅನ್ನುತ್ತಾ || ೨ ||

ಮನದಲ್ಲೇ ಅಂದು ಕೊಂಡರು
ಹುಚ್ಚು ಇವನಿಗೆ
ಅದೆಲ್ಲ ತಕ್ಕೊಂಡು
ನಮಗೇನು ಮಾಡುವುದು
ಈ ಮಂಕು ಬುದ್ದಿಯಾತನಿಗೆ
ಏಕೆ ತಿಳಿಯುತಿಲ್ಲ
ಪರಿ ಪರಿಯಾಗಿ ಬೇಡಿ
ನಮಗೆ ಬೇಕಾದ್ದು
ಪಡೆಯುವದೆ ಮುಖ್ಯ ಗುರಿ
ಮತ್ತೆಲ್ಲ ಶಾಸ್ತ್ರ ಬರೀ ಬದನೆಕಾಯಿ || ೩ ||

ಹಾಳಾದ್ದು ಬದನೆಕಾಯಿ ನೆನಪಿಸಿದ
ಬಹು ದಿನವಾಯಿತು
ಇಂದೇ ಮಾಡಿ
ಹೊಡೆಯುವ ಘಮ ಘಮಿಸುವ
ಬದನೆಕಾಯಿ ಹುಳಿ || ೪ ||
 ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...