Friday, April 15, 2016

ಯಥಾರ್ಥಕೆ ದಾರಿದೀಪ

ಬಿಡಿ ಬಿಡಿಯಾಗಿ ವಿಷಯ
ತಿಳಿಯುವದು ಸರಳ
ಅನುಭಗಳಿಂದ
ಆದ ಗ್ರಹಿಸಬಹುದು
ಮಾನಸ ಸರೋವರದಲಿ
ಅಲೆಗಳಿದ್ದಾಗೂ ಕೂಡ || ೧ ||

ಒಟ್ಟು ಭಾವ ಗ್ರಹಿಸಲು ಮಾತ್ರ
ವಿಚಾರಗಳ  ಅಲೆ
ನಿಲ್ಲಬೇಕು
ಮಾನಸ ಸರೋವರ
ತಿಳಿಯಾಗಬೇಕು
ಅದಾದಾಗಲೇ ಕಾಣುವುದು
ಭಾವದ ಆಳ || ೨ ||


ಒಟ್ಟು ಭಾವದಿಂದ ಬಿಡಿ ವಿಷಯದ ಗ್ರಹಿಕೆ
ಬಿಡಿ ವಿಷಯಗಳ ಅನುಭವದಿಂದ
ಒಟ್ಟು ಭಾವದ ಗ್ರಹಿಕೆ
ಒಂದಕೊಂದು ಪೂರಕ ಅನ್ಯೋನ್ಯ ಅನಿವಾರ್ಯ
ಅವೆರಡರ ನಿರಂತರ ಒಡನಾಟವೇ
ಯಥಾರ್ಥಕೆ ದಾರಿದೀಪ || ೩ ||
ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...