ಬಾಳೊಂದು ಹೋರಾಟ
ಹೋರಾಟಗಾರರು ನಾವೆಲ್ಲ
ಹೋರಾಟವೆಂದ ಮೇಲೆ
ಹರಿಯುವುದು ನದಿಯಾಗಿ
ರಕ್ತ ಕಣ್ಣೀರು
ಹೋರಾಟದ ಕೊನೆಗೆ
ಸಾವು ಖಚಿತ || ೧ ||
ಇದನರಿತು ಕೂಡ
ಬಂಧಿಸದಿರಿ ಮಕ್ಕಳ
ಕನಸುಗಳನ್ನು ದಮ್ಮಯ್ಯ
ಬಿಟ್ಟು ಬಿಡಿ
ಹಾರಲು ಅವನು
ನೀಲಾಕಾಶದಲಿ || ೨ ||
ಬಿಟ್ಟು ಬಿಡಿ
ಅವರೇ ಆಯ್ದುಕೊಳ್ಳಲಿ
ತಮ್ಮ ಹೋರಾಟವನ್ನು
ದಮ್ಮಯ್ಯ ಬಂಧಿಸದಿರಿ
ಅವರನು ಬರಿ
ಹೊಟ್ಟೆಪಾಡಿನ ಗೊಟಕ್ಕೆ || ೩ ||
ಜೀತದಾಳಾಗಿ ದುಡಿದರೇನು
ಬಂತು ಸಂತೃಪ್ತಿ
ಗಳಿಸಿದ ಸಂಪತ್ತನ್ನು
ಅನುಭವಿಸಲು ಆಗದೆ
ಸತ್ತಂತೆ ಜೀವಿಸುವ
ಜೀವಂತ ಶವವಾಗಿಸುವ
ಬದಲು ದಮ್ಮಯ್ಯ
ಬಿಟ್ಟು ಬಿಡಿ || ೪ ||
ಹೋರಾಡಲಿ ಮಕ್ಕಳು
ಅವರು ಆಯ್ದ
ಹೋರಾಟವನ್ನು ಮನ
ಬಿಚ್ಚಿ ವೀರಾವೇಶದಿಂದ
ಹೊಟ್ಟೆ ತುಂಬದೆ
ಸತ್ತರೆ ಸಾಯಲಿ
ಬಿಡಿ ಸಿಗುವುದು
ಸಾವಲ್ಲೂ ಸಂತೃಪ್ತಿ || ೫ ||
ದಮ್ಮಯ್ಯ ಬಿಟ್ಟು
ಬಿಡಿ ನೀವು
ಕಂಡ ಸೀಮಿತ
ಜೇವನವನ್ನೇ ಏಕೆ
ಮಾಡುತಿರುವಿರಿ
ಜೀವನದ ಪರಿಭಾಷೆ
ದಮ್ಮಯ್ಯ ಬಿಟ್ಟು
ಬಿಡಿ ಮಕ್ಕಳ
ಕನಸುಗಳನು ಹಾರಲಿ
ಅವು ನೀಲಾಕಾಶದಲ್ಲಿ || ೬ ||
- ಬುಡ ಬುಡ್ಕಿ ಬಾಬಾ
ಹೋರಾಟಗಾರರು ನಾವೆಲ್ಲ
ಹೋರಾಟವೆಂದ ಮೇಲೆ
ಹರಿಯುವುದು ನದಿಯಾಗಿ
ರಕ್ತ ಕಣ್ಣೀರು
ಹೋರಾಟದ ಕೊನೆಗೆ
ಸಾವು ಖಚಿತ || ೧ ||
ಇದನರಿತು ಕೂಡ
ಬಂಧಿಸದಿರಿ ಮಕ್ಕಳ
ಕನಸುಗಳನ್ನು ದಮ್ಮಯ್ಯ
ಬಿಟ್ಟು ಬಿಡಿ
ಹಾರಲು ಅವನು
ನೀಲಾಕಾಶದಲಿ || ೨ ||
ಬಿಟ್ಟು ಬಿಡಿ
ಅವರೇ ಆಯ್ದುಕೊಳ್ಳಲಿ
ತಮ್ಮ ಹೋರಾಟವನ್ನು
ದಮ್ಮಯ್ಯ ಬಂಧಿಸದಿರಿ
ಅವರನು ಬರಿ
ಹೊಟ್ಟೆಪಾಡಿನ ಗೊಟಕ್ಕೆ || ೩ ||
ಜೀತದಾಳಾಗಿ ದುಡಿದರೇನು
ಬಂತು ಸಂತೃಪ್ತಿ
ಗಳಿಸಿದ ಸಂಪತ್ತನ್ನು
ಅನುಭವಿಸಲು ಆಗದೆ
ಸತ್ತಂತೆ ಜೀವಿಸುವ
ಜೀವಂತ ಶವವಾಗಿಸುವ
ಬದಲು ದಮ್ಮಯ್ಯ
ಬಿಟ್ಟು ಬಿಡಿ || ೪ ||
ಹೋರಾಡಲಿ ಮಕ್ಕಳು
ಅವರು ಆಯ್ದ
ಹೋರಾಟವನ್ನು ಮನ
ಬಿಚ್ಚಿ ವೀರಾವೇಶದಿಂದ
ಹೊಟ್ಟೆ ತುಂಬದೆ
ಸತ್ತರೆ ಸಾಯಲಿ
ಬಿಡಿ ಸಿಗುವುದು
ಸಾವಲ್ಲೂ ಸಂತೃಪ್ತಿ || ೫ ||
ದಮ್ಮಯ್ಯ ಬಿಟ್ಟು
ಬಿಡಿ ನೀವು
ಕಂಡ ಸೀಮಿತ
ಜೇವನವನ್ನೇ ಏಕೆ
ಮಾಡುತಿರುವಿರಿ
ಜೀವನದ ಪರಿಭಾಷೆ
ದಮ್ಮಯ್ಯ ಬಿಟ್ಟು
ಬಿಡಿ ಮಕ್ಕಳ
ಕನಸುಗಳನು ಹಾರಲಿ
ಅವು ನೀಲಾಕಾಶದಲ್ಲಿ || ೬ ||
- ಬುಡ ಬುಡ್ಕಿ ಬಾಬಾ
"ಬಂಧಿಸದಿರಿ ಮಕ್ಕಳ ಹೊಟ್ಟೆಪಾಡಿನ ಗೂಟಕ್ಕೆ" ಕವನದ ಕಳಕಳಿ ಮೆಚ್ಚುಗೆಯಾಗುತ್ತೆ.
ReplyDeleteಧನ್ಯವಾದಗಳು ಸಾರ್
ReplyDelete