Friday, December 2, 2016

ಕಾವ್ಯದ ಚಿಂತೆ

ಕಾವ್ಯ ಚಿಂತಾಕ್ರಾಂತವಾಗಿತ್ತು
ಅಯ್ಯೋ ಮಾರಾಯ
ಹೇಗೆ ದಾಟಿಸಿವೆಯೋ ನನ್ನ ನೀ
ಈ ಕಣ್ಣೀರ ಸಾಗರದಾಚೆ
ಇಲ್ಲ ನಿನ್ನ ಬಳಿ
ವ್ಯಾಕರಣದ ಹರಿಕೊಲು
ಭಾಷಾ ಪಾಂಡಿತ್ಯದ ದೋಣಿ || ೨ ||

ಹೇಳಿದೆ ಸಮಾಧಾನ ಕಾವ್ಯಕ್ಕೆ
ಚಿಂತೆ ಬಿಡು ಇದೇ ನನ್ನ ಬಳಿ
ಭಾವದ ಹರಿಕೋಲು
ಕಣ್ಣೀರಿಂದ ಬೆಳೆದ ಮರದ ದೋಣಿ
ದಾಟುವೆವು ಈ ಕಣ್ಣೀರ ಸಾಗರ
ಕ್ಷಣ ಮಾತ್ರದಲಿ || ೩ ||

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...