ಯಾರೋ ಹಾಕಿದ ದಿನಚರಿಯಲ್ಲಿ ಬಂಧಿಯಾದಾಗ
ಕಾಡು ಕುದುರೆಯ ನಾಗಾಲೋಟ ಕಂಡು
ನಮಗೂ ಹಾಗೆ ಸ್ವಾತಂತ್ರ್ಯ ಸಿಗಬಾರದಾ
ಎಂದೆನೆಸುವದರಲ್ಲಿ ಎಳ್ಳಷ್ಟೂ ತಪ್ಪಿಲ್ಲ ಬಿಡಿ || ೧ ||
ಮಜಕೂರ ಇರುವುದು ಆ ಸ್ವಾತಂತ್ರ್ಯ ಸಿಕ್ಕಾಗ
ಅದೇ ಕಾಡು ಕುದುರೆಯ ಸವಾರಿ ಮಾಡಿದಂತೆ
ಅದರಲಿ ಅಡಗಿದೆ ಅಪರಿಮಿತ ಶಕ್ತಿ
ಹಾಗೆಯೇ ಬೆಸದಿದೆ ನಿರಂಕುಶ ಚಂಚಲತೆ || ೨ ||
ಮನ ಬಂದತ್ತ ಓಡುವ ಕುದುರೆಯ
ನಿಯಂತ್ರಣ ತಪ್ಪಿದರೆ ದುರಂತ ಕಟ್ಟಿಟ್ಟ ಬುತ್ತಿ
ನಿರಂತರ ಶಿಸ್ತಿನಿಂದ ಪಳಗಿಸಿ ಓಡಿಸಿದರೆ
ತಲುಪಬಹುದು ಅರ್ಥಪೂರ್ಣ ಜೀವನದ ಗುರಿ || ೩ ||
- ಬುಡ ಬುಡ್ಕಿ ಬಾಬಾ
ಕಾಡು ಕುದುರೆಯ ನಾಗಾಲೋಟ ಕಂಡು
ನಮಗೂ ಹಾಗೆ ಸ್ವಾತಂತ್ರ್ಯ ಸಿಗಬಾರದಾ
ಎಂದೆನೆಸುವದರಲ್ಲಿ ಎಳ್ಳಷ್ಟೂ ತಪ್ಪಿಲ್ಲ ಬಿಡಿ || ೧ ||
ಮಜಕೂರ ಇರುವುದು ಆ ಸ್ವಾತಂತ್ರ್ಯ ಸಿಕ್ಕಾಗ
ಅದೇ ಕಾಡು ಕುದುರೆಯ ಸವಾರಿ ಮಾಡಿದಂತೆ
ಅದರಲಿ ಅಡಗಿದೆ ಅಪರಿಮಿತ ಶಕ್ತಿ
ಹಾಗೆಯೇ ಬೆಸದಿದೆ ನಿರಂಕುಶ ಚಂಚಲತೆ || ೨ ||
ಮನ ಬಂದತ್ತ ಓಡುವ ಕುದುರೆಯ
ನಿಯಂತ್ರಣ ತಪ್ಪಿದರೆ ದುರಂತ ಕಟ್ಟಿಟ್ಟ ಬುತ್ತಿ
ನಿರಂತರ ಶಿಸ್ತಿನಿಂದ ಪಳಗಿಸಿ ಓಡಿಸಿದರೆ
ತಲುಪಬಹುದು ಅರ್ಥಪೂರ್ಣ ಜೀವನದ ಗುರಿ || ೩ ||
- ಬುಡ ಬುಡ್ಕಿ ಬಾಬಾ
ಅರ್ಥಪೂರ್ಣ ಕವನ.
ReplyDeleteಧನ್ಯವಾದಗಳು.
ReplyDelete