Sunday, August 28, 2016

ಸ್ವಾತಂತ್ರ್ಯ

ಯಾರೋ ಹಾಕಿದ ದಿನಚರಿಯಲ್ಲಿ ಬಂಧಿಯಾದಾಗ
ಕಾಡು ಕುದುರೆಯ ನಾಗಾಲೋಟ ಕಂಡು
ನಮಗೂ ಹಾಗೆ ಸ್ವಾತಂತ್ರ್ಯ  ಸಿಗಬಾರದಾ
ಎಂದೆನೆಸುವದರಲ್ಲಿ ಎಳ್ಳಷ್ಟೂ ತಪ್ಪಿಲ್ಲ ಬಿಡಿ || ೧ ||

ಮಜಕೂರ ಇರುವುದು  ಆ ಸ್ವಾತಂತ್ರ್ಯ  ಸಿಕ್ಕಾಗ
ಅದೇ ಕಾಡು ಕುದುರೆಯ ಸವಾರಿ ಮಾಡಿದಂತೆ
ಅದರಲಿ ಅಡಗಿದೆ ಅಪರಿಮಿತ ಶಕ್ತಿ
ಹಾಗೆಯೇ ಬೆಸದಿದೆ  ನಿರಂಕುಶ ಚಂಚಲತೆ || ೨ ||

ಮನ ಬಂದತ್ತ ಓಡುವ ಕುದುರೆಯ
ನಿಯಂತ್ರಣ ತಪ್ಪಿದರೆ ದುರಂತ ಕಟ್ಟಿಟ್ಟ ಬುತ್ತಿ
ನಿರಂತರ ಶಿಸ್ತಿನಿಂದ ಪಳಗಿಸಿ ಓಡಿಸಿದರೆ
ತಲುಪಬಹುದು ಅರ್ಥಪೂರ್ಣ ಜೀವನದ ಗುರಿ || ೩ ||
ಬುಡ ಬುಡ್ಕಿ ಬಾಬಾ

2 comments:

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...